top of page

ಬೆಂಗಳೂರಿನಲ್ಲಿ ಅಗ್ನಿ ಅವಘಡ : ಧಗಧಗನೆ ಹೊತ್ತಿ ಉರಿದ ಒಕಿನೊವಾ ಶೋರೂಮ್​

ಬೆಂಗಳೂರಿನಲ್ಲಿ ಅಗ್ನಿ ಅವಘಡ : ಧಗಧಗನೆ ಹೊತ್ತಿ ಉರಿದ ಒಕಿನೊವಾ ಶೋರೂಮ್

ಬೆಂಗಳೂರು, (ಜನವರಿ 27): ರಾಜಾಜಿನಗರದ ರಾಜ್‌ಕುಮಾರ್‌ ರಸ್ತೆಯಲ್ಲಿನ ಎಲೆಕ್ಟ್ರಿಕ್‌ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಬೈಕ್‌ಗಳು ಬೆಂಕಿಗಾಹುತಿಯಾಗಿವೆ. ಇಂದು(ಜನವರಿ 27) ಒಕಿನೊವಾ ಎಲೆಕ್ಟ್ರಿಕ್‌ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬ್ಯಾಟರಿ ಓವರ್‌ ಚಾರ್ಜ್‌ ಆಗಿ ಸ್ಫೋಟಿಸಿದ ಹಿನ್ನೆಲೆ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಶೋರೂಮ್​ನಲ್ಲಿದ್ದ ಸಿಬ್ಬಂದಿ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದ್ರೆ, ಕಟ್ಟಡ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜಾಜಿನಗರದ ರಾಜ್​​ಕುಮಾರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್​ ಬೈಕ್​ ಶೋರೂಮ್​ನಲ್ಲಿ ಒಟ್ಟು 74 ಬೈಕ್​ಗಳು ಇದ್ದವು. ಈ ಪೈಕಿ 19 ಬೈಕ್​ಗಳು ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, 9 ಬೈಕ್​ಗಳಿಗೆ ಸ್ವಲ್ಪ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇನ್ನು ಲೈಸೆನ್ಸ್​ ಅವಧಿ ಮೀರಿದ ಬೈಕ್ ಮಾರಾಟ ಮಾಡುತ್ತಿದ್ದ ಆರೋಪದಡಿ ಶುಕ್ರವಾರವಷ್ಟೇ ಆರ್​​ಟಿಓ ಅಧಿಕಾರಿಗಳು ಈ ಶೋರೋಮ್​ ಮೇಲೆ ದಾಳಿ ಮಾಡಿದ್ದರು. ಕಡಿಮೆ ಸ್ಪೀಡ್ 25 ಕಿ.ಮೀ ಮತ್ತು ಕಡಿಮೆ ವ್ಯಾಟ್ ಬ್ಯಾಟರಿ ಬಳಕೆಗೆ ಅನುಮತಿ ನೀಡಲಾಗಿತ್ತು. ಆದ್ರೆ ಹೆಚ್ಚಿನ ಸ್ಪೀಡ್ ಹಾಗೂ ಒಂದು ಕಿಲೋ ವ್ಯಾಟ್ ಬ್ಯಾಟರಿ ಬಳಕೆ ಮಾಡಲಾಗಿದೆ. ಬ್ಯಾಟರಿ ಕ್ವಾಲಿಟಿ ಇಲ್ಲದಿದ್ದದ್ದೇ ಘಟನೆಗೆ ಕಾರಣ ಎಂದು ಮಾಹಿತಿ ಲಭ್ಯವಾಗಿದೆ.


ಅಗ್ನಿಶಾಮಕ ಅಧಿಕಾರಿ ಕಿಶೋರ್ ಹೇಳಿದ್ದೇನು? : ಇನ್ನು ಅಗ್ನಿ ಅವಘಡದ ಬಗ್ಗೆ ಅಗ್ನಿಶಾಮಕ ಅಧಿಕಾರಿ ಕಿಶೋರ್ ಪ್ರತಿಕ್ರಿಯಿಸಿದ್ದು, ಇಂದು ಮಧ್ಯಾಹ್ನ 2.06 ನಿಮಿಷಕ್ಕೆ ಅಗ್ನಿಶಾಮಕ ಕಂಟ್ರೋಲ್ ಗೆ ರೂಮ್ ಗೆ ಕಾಲ್ ಬಂದಿದೆ. ಬಳಿಕ ರಾಜಾಜಿನಗರ ಅಗ್ನಿಶಾಮಕ ಸೆಂಟರ್ ನಿಂದ ಎರಡು ವಾಹನ ಬಂದಿದೆ. ಬೆಂಕಿ ಸಂಪೂರ್ಣವಾಗಿ ನಂದಿಸಲಾಗಿದೆ. ಮೇಲ್ನೋಟಕ್ಕೆ ಶಾರ್ಟ್ ಸೆಕ್ಯೂರಿಟ್ ಅಥವಾ ಬ್ಯಾಟರಿ ಸ್ಪೋಟಗೊಂಡಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ನಾಲ್ಕು ಮಂದಿ ಒಳಗೆ ಇದ್ರು. ಅವರು ಕೂಡಲೇ ಹೊರ ಬಂದಿದ್ದಾರೆ. ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಎಲೆಕ್ಟ್ರಿಕ್​ ಬೈಕ್​ ಶೋರೋಮ್​ನಲ್ಲಿ ಅಗ್ನಿ ದುರಂತದಲ್ಲಿ ಓರ್ವ ಯುವತಿ ಸಜೀವ ದಹನವಾಗಿದ್ದಳು. ಇದಾದ ಬಳಿಕ 2025ರ ಹೊಸ ವರ್ಷದ ಮೊದಲ ದಿನದಂದೇ ನಗರದ ಮಹದೇವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬಿ ನಾರಾಯಣಪುರದಲ್ಲಿರುವ ಬೈಕ್ ಶೋರೂಮಿಗೆ ಬೆಂಕಿಬಿದ್ದು ಯಮಹಾ ಬ್ರ್ಯಾಂಡಿನ ಸುಮಾರು 60ಬೈಕ್ ಗಳು ಅಗ್ನಿಗಾಹುತಿಯಾಗಿದ್ದವು. ಇದರ ಬೆನ್ನಲ್ಲೇ ಇದೀಗ ಮತ್ತೊಂದು ಶೋರೂಮ್​ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page