ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
- ಸಂಪಾದಕೀಯ
- Mar 10
- 1 min read
ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಹಾಸನ ಜಿಲ್ಲೆ ಅರಸೀಕೆರೆ ಮೂಲದ ಗಾಯತ್ರಿ ಚಿನ್ನಾಭರಣವಿದ್ದಂತಹ ಬ್ಯಾಗ್ನ ಮಾಲೀಕರು. ಗಾಯತ್ರಿ ಕುಂದೂರಿನಲ್ಲಿನ ತನ್ನ ಸಂಬಂಧಿಕರ ಮನೆಗೆ ಸೀಮಂತ ಕಾರ್ಯಕ್ರಮಕ್ಕೆ ಬಂದಿದ್ರು. ಆಟೋದಿಂದ ಇಳಿದು ಹೋಗುವಾಗ ಬ್ಯಾಗನ್ನ ಬಿಟ್ಟು ಹೋಗಿದ್ದರು.
ನಂತರ ಬ್ಯಾಗ್ ನೋಡಿದ ಆಟೋ ಚಾಲಕ ಹನುಮಂತಪುರದ ನಿವಾಸಿ ರವಿಕುಮಾರ್ ಬ್ಯಾಗ್ ಮಾಲೀಕರನ್ನ ಹುಡುಕಾಟ ನಡೆಸಿದ್ದಾರೆ. ಎಷ್ಟು ಹುಡುಕಿದರೂ ಸಿಗದಿದ್ದಾಗ, ಪೊಲೀಸ್ ಠಾಣೆಗೆ ಬ್ಯಾಗ್ನ ಒಪ್ಪಿಸಿದ್ದಾರೆ. ನಂತರ ಶೋಧ ಕಾರ್ಯ ನಡೆಸಿದ ಪೊಲೀಸರು ಮಾಲೀಕರನ್ನ ಪತ್ತೆ ಮಾಡಿದ್ದಾರೆ.
ಬ್ಯಾಗ್ನಲ್ಲಿ ಇದ್ದಂತಹ 4 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನ ಮಾಲೀಕರಾದ ಗಾಯತ್ರಿಗೆ ಅವರಿಗೆ ಪೊಲೀಸರು ಒಪ್ಪಿಸಿದ್ದಾರೆ. ಆಟೋ ಚಾಲಕ ರವಿಕುಮಾರ್ನ ಪ್ರಾಮಾಣಿಕತೆಗೆ ಗಾಯತ್ರಿ ಕೃತಜ್ಞತೆ ಸಲ್ಲಿಸಿದ್ದಾರೆ.

Comments